ಸುಚೇತಾ ಕಡೆಠಂಕರ ಅವರು ಭಾರತದ ಪುಣೆ ಮೂಲದವರು. ಅವರು ೧೫ ಜುಲೈ ೨೦೧೧ ರಂದು 1,000 (1,600 ) ದೂರದ ಗೋಬಿ ಮರುಭೂಮಿಯಲ್ಲಿ ನಡೆದ ಮೊದಲ ಭಾರತೀಯ ಮಹಿಳೆಯಾದರು. ಇದು ಮಂಗೋಲಿಯಾದಲ್ಲಿರುವ ಏಷ್ಯಾದ ಅತಿದೊಡ್ಡ ಮರುಭೂಮಿ. ೨೦೧೧ ದಂಡಯಾತ್ರೆಯಲ್ಲಿ ಮರುಭೂಮಿ ಪರಿಶೋಧಕರಾದ ರಿಪ್ಲಿ ಡೇವನ್‌ಪೋರ್ಟ್ ನೇತೃತ್ವದಲ್ಲಿ ಒಂಬತ್ತು ದೇಶಗಳ ೧೩ ಸದಸ್ಯರ ತಂಡದಲ್ಲಿ ಕಡೆಥಂಕರ್ ಅವರು ಭಾಗಿಯಾಗಿದ್ದರು. ಈ ಮಾರ್ಗದರ್ಶಿ ದಂಡಯಾತ್ರೆಯಲ್ಲಿ ನಾಲ್ಕು-ಚಕ್ರ ಡ್ರೈವ್ ಟ್ರಕ್, ಸ್ಥಳೀಯ ಮಂಗೋಲಿಯನ್ ಮಾರ್ಗದರ್ಶಿಗಳು ಮತ್ತು ೧೨ ಬ್ಯಾಕ್ಟ್ರಿಯನ್ ಒಂಟೆಗಳು ಪಾಲ್ಗೊಂಡಿದ್ದವು. == ವೃತ್ತಿ == ಸುಚೇತಾ ಪ್ರಸ್ತುತ ಯೋಗವನ್ನು ಕಲಿಸುತ್ತಿದ್ದಾರೆ ಹಾಗೂ ನವಸಹ್ಯಾದ್ರಿ ಪುಣೆಯಲ್ಲಿ ಕೊಹಮ್ ಫಿಟ್ ಎಂಬ ಫಿಟ್‌ನೆಸ್ ಚಟುವಟಿಕೆ ಕೇಂದ್ರವನ್ನು ನಡೆಸುತ್ತಿದ್ದಾರೆ. ಸ್ನಾಯುಗಳು, ಉಸಿರು ಮತ್ತು ಹೆಚ್ಚು ಮುಖ್ಯವಾಗಿ ಮನಸ್ಸನ್ನು ಸಂಯೋಜಿಸುವ ಒಟ್ಟಾರೆಯಾಗಿ ಫಿಟ್‌ನೆಸ್‌ನಲ್ಲಿ ಅವರು ನಂಬಿದ್ದಾರೆ. ಕೊಹಾಮ್ ಫಿಟ್‌ನಲ್ಲಿ, ಅವರು ಯೋಗ ಮತ್ತು ಪೈಲೇಟ್ಸ್‌ನ ತತ್ವಗಳನ್ನು ಸಂಯೋಜಿಸುವ ಮೂಲಕ ಒಬ್ಬರಿಂದ ಒಬ್ಬರಿಗೆ ಮತ್ತು ಸಣ್ಣ ಗುಂಪು ಮತ್ತು ದೊಡ್ಡ ಗುಂಪಿನಲ್ಲಿ ಜನರಿಗೆ ತರಬೇತಿ ನೀಡುತ್ತಾರೆ. == ಜೀವನಚರಿತ್ರೆ == ಸುಚೇತಾ ಪುಣೆಯ ಫರ್ಗುಸನ್ ಕಾಲೇಜಿನಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರಂಭದಲ್ಲಿ ಪತ್ರಕರ್ತೆಯಾಗಿ ನಂತರ ಅವರು ಐಟಿ ವೃತ್ತಿಪರರಾದರು ನಂತರ ಸಿಮ್ಯಾಂಟೆಕ್‌ನಲ್ಲಿ ಪ್ರಮುಖ ಮಾಹಿತಿ ಡೆವಲಪರ್ ಆಗಿ ನೇಮಕಗೊಂಡರು. ಹವ್ಯಾಸಿ ಕ್ರೀಡಾ ವ್ಯಕ್ತಿಯಾಗಿದ್ದ ಇವರ ಉತ್ಸಾಹಭರಿತ ಹವ್ಯಾಸವು ಪರ್ವತಗಳಲ್ಲಿ ಚಾರಣ, ಸೈಕ್ಲಿಂಗ್, ನದಿ ದಾಟುವಿಕೆ ಮತ್ತು ಮರುಭೂಮಿಯ ನಡಿಗೆಯನ್ನು ಒಳಗೊಂಡ ಸಾಹಸ ಕ್ರೀಡೆಯಾಗಿದೆ . ಅವರು ೨೦೦೮ ರಲ್ಲಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಟ್ರೆಕ್ಕಿಂಗ್‌ ಸೇರಿದಂತೆ ಹಿಮಾಲಯ ಚಾರಣಗಳು ಮತ್ತು ದಂಡಯಾತ್ರೆಗಳಲ್ಲಿ ಭಾಗವಹಿಸಿದ್ದಾರೆ. ಅವರು ಸಹ್ಯಾದ್ರಿ ಪರ್ವತಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಚಾರಣಗಳನ್ನು ಮಾಡಿದ್ದಾರೆ. === ಗೋಬಿ ಮರುಭೂಮಿಯ ನಡಿಗೆ === "ಗೋಬಿ ಕ್ರಾಸಿಂಗ್ ೨೦೧೧" ಎಂಬ ಶೀರ್ಷಿಕೆಯ ಕಡೆಠಂಕರ ಅವರು ಪೂರ್ಣಗೊಳಿಸಿದ ಗೋಬಿ ಟ್ರೆಕ್ ಐರ್ಲೆಂಡ್‌ನ ಎಕ್ಸ್‌ಪ್ಲೋರ್ ಫೌಂಡೇಶನ್ ಆಯೋಜಿಸಿದ ಕಾರ್ಯಕ್ರಮವಾಗಿದೆ. ಮಂಗೋಲಿಯಾದಲ್ಲಿ ಗೋಬಿ (ವಿಶ್ವದ ಐದನೇ ಅತಿ ದೊಡ್ಡ ಮರುಭೂಮಿ) ಕಾಡು ಮರುಭೂಮಿಯನ್ನು ಅನ್ವೇಷಿಸಲು ಇಚ್ಛಿಸುವ ಯುವಜನರಿಗೆ ಇದು ಅವಕಾಶ ಒದಗಿಸುತ್ತದೆ. ಇದು 1,600 (990 ) ದೂರವನ್ನು ೬೦ ದಿನಗಳಲ್ಲಿ ಕ್ರಮಿಸುವ ಚಾರಣವಾಗಿತ್ತು . ಕ್ರಿಸ್ಟೋಫರ್ ಶ್ರೇಡರ್ ಮತ್ತು ಫರಾಜ್ ಶಿಬ್ಲಿ ಕಾಲ್ನಡಿಗೆಯಲ್ಲಿ ಗೋಬಿ ಮರುಭೂಮಿಯನ್ನು ದಾಟಿದ ಅತ್ಯಂತ ಕಿರಿಯ ವ್ಯಕ್ತಿಗಳು. ಇವರನ್ನು ಸೇರಿದಂತೆ ಆಯ್ದ ೧೩ ವಾಕರ್‌ಗಳಲ್ಲಿ ಕಡೇಥಂಕರ್ ಒಬ್ಬರು. ). ತಂಡವು ಏಳು ಮಹಿಳೆಯರನ್ನು ಒಳಗೊಂಡಿತ್ತು ಆದರೆ ಅವರಲ್ಲಿ ಮೂವರು ಮಾತ್ರ ಕೊನೆಯವರೆಗೂ ಚಾರಣವನ್ನು ಸಹಿಸಿಕೊಂಡರು ಅವರಲ್ಲಿ ಕಡೆಠಂಕರ್ ಸಹ ಒಬ್ಬರು. ದಂಡಯಾತ್ರೆಗೆ ಆಕೆಯ ಖರ್ಚು ಯು ಎಸ್ $೭೦೦೦ ಆಗಿದ್ದು, ಆಕೆಯ ಪ್ರಯಾಣದ ಖರ್ಚನ್ನು ಆಕೆಯ ಉದ್ಯೋಗದಾತ ಸಿಮ್ಯಾಂಟೆಕ್ ಪೂರೈಸಿದ್ದಾರೆ. ಮಂಗೋಲಿಯಾದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಬೆಂಬಲಿಸಲು ಹಾಗೂ ಮಂಗೋಲಿಯನ್ ಎನ್‌ಜಿಒ ಎಡು ರಿಲೀಫ್ ಅನ್ನು ಬೆಂಬಲಿಸಲು ಇದು ಚಾರಿಟಿ ಟ್ರೆಕ್ ಆಗಿತ್ತು. ಟ್ರೆಕ್ ಮಾರ್ಗವನ್ನು ಕಡೆಠಂಕರ್ ಅವರು ನೀರಸ, ಮಂಕುಕವಿದ ಮತ್ತು ಅಂತ್ಯವಿಲ್ಲದ ಮಾರ್ಗವಾಗಿತ್ತು ಎಂದು ವಿವರಿಸಿದ್ದಾರೆ. ಕಡೆಠಂಕರ್ ಅವರು ಚಾರಣದಲ್ಲಿ ಭಾಗವಹಿಸಲು ನೋಂದಾಯಿಸಿದ ನಂತರ, ಅವರು ಆರು ತಿಂಗಳ ಕಾಲ ತಮ್ಮ ಕಛೇರಿಯಿಂದ ಮತ್ತು ಹಿಂದೆ 24 (15 ) ದೂರದವರೆಗೆ ನಡೆದು ತರಬೇತಿ ಪಡೆದರು. ಭಾರವಾದ ಹೊರೆಯನ್ನು ಬೆನ್ನಿನ ಮೇಲೆ ಒಯ್ಯುತ್ತಿದ್ದರು. ಚಾರಣವು ಪಶ್ಚಿಮದಿಂದ ಪೂರ್ವ ದಿಕ್ಕಿನಲ್ಲಿ, ಖೊಂಗೊರಿನ್ ಎಲ್ಸ್‌ನ ಉತ್ತರಕ್ಕೆ (ಇದು ಮಂಗೋಲಿಯಾದ ಅತಿದೊಡ್ಡ ಮರಳು ದಿಬ್ಬಗಳಲ್ಲಿ ಒಂದಾಗಿದೆ) ಪಶ್ಚಿಮದಲ್ಲಿ ಖೋವ್ಡ್ ಪ್ರಾಂತ್ಯದ ಉಪ-ಜಿಲ್ಲೆಯಾದ ಬುಲ್ಗಾನ್‌ನಿಂದ ಪ್ರಾರಂಭವಾಗಿ ಡೊರ್ನೊಗೊವಿ ಪ್ರಾಂತ್ಯದ ರಾಜಧಾನಿ ಸೈನ್‌ಶಾಂಡ್‌ನಲ್ಲಿ ಕೊನೆಗೊಳ್ಳುತ್ತದೆ. ಈ ಮಾರ್ಗದ ಉದ್ದಕ್ಕೂ ಮಾನವ ವಾಸಸ್ಥಾನವು ಅಪರೂಪವಾಗಿದೆ, ಅಲೆಮಾರಿಗಳು ಮಾತ್ರ "ಗಾರ್" ಎಂದು ಕರೆಯಲ್ಪಡುವ ಇಗ್ಲೂ ಮಾದರಿಯ ಗುಡಿಸಲುಗಳಲ್ಲಿ ವಾಸಿಸುತ್ತಾರೆ. ಅವರು ಬಹಳ ಸೌಜನ್ಯದಿಂದ ಕೂಡಿದ್ದರು ಮತ್ತು ಒಂದೇ ಸಮಯದಲ್ಲಿ ಅನೇಕ ಜನರನ್ನು ನೋಡಿ ಸಂತೋಷಪಟ್ಟರು. ಅವರು ಸಸ್ಯಾಹಾರಿಯಾಗಿದ್ದರಿಂದ ಮಂಗೋಲಿಯನ್ ನೂಡಲ್ಸ್ ಮತ್ತು ಪಾಸ್ಟಾಗಳನ್ನು ಸೇವಿಸಿ ಬದುಕುತ್ತಿದ್ದ ಕಡೆಠಂಕರ್‌ಗೆ ಚೀಸ್ ಮತ್ತು ಹಾಲನ್ನು ಸಹ ಪೂರೈಸಿದರು. ಚಾರಣದ ಸಮಯದಲ್ಲಿ, ಕಡೆಠಂಕರ್ ಅವರು ಅನೇಕ ಕಷ್ಟಗಳನ್ನು ಎದುರಿಸಿದರು, ಅಂತಹ ಒಂದು ಕಷ್ಟವೆಂದರೆ ಅವರು ಕೆಲವು ದಿನಗಳವರೆಗೆ ಜ್ವರದ ದಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮನ್ನು ಸ್ವೆಟರ್‌ಗಳ ಪದರಗಳಿಂದ ಮುಚ್ಚಿಕೊಂಡಿದ್ದರು. ಮತ್ತೊಂದು ಘಟನೆಯೆಂದರೆ ತಮ್ಮ ಸಾಮಾನುಗಳನ್ನು ಹೊತ್ತೊಯ್ಯುತ್ತಿದ್ದ ಒಂಟೆಯಿಂದ ಒದೆ ತಿನ್ನುವುದು. ಪಾದಯಾತ್ರೆಯ ವೇಳೆ ೩ ದಿನಗಳ ಕಾಲ ಮರಳಿನ ಬಿರುಗಾಳಿಯೂ ಇತ್ತು. ಒಂದು ಸಂದರ್ಭದಲ್ಲಿ ಆಹಾರ ಸಾಗಿಸುವ ಒಂಟೆಯೊಂದು ಬೋಲ್ಟ್ ಮಾಡಿತ್ತು ಆದರೆ ಅಂತಿಮವಾಗಿ ಅದನ್ನು ಹಿಂತಿರುಗಿಸಲಾಯಿತು. ಒಂದು ದಿನ ಮಳೆಯ ಬಿರುಗಾಳಿ ಕೂಡ ಇತ್ತು. ಆದರೆ ಈ ಯಾವುದೇ ಅಪಾಯಗಳು ಚಾರಣವನ್ನು ಪೂರ್ಣಗೊಳಿಸುವ ಆಕೆಯ ದೃಢಸಂಕಲ್ಪಕ್ಕೆ ಅಡ್ಡಿಯಾಗಲಿಲ್ಲ. ಹವಾಮಾನ ಪರಿಸ್ಥಿತಿಗಳು, ಟ್ರೆಕ್‌ನ ಉದ್ದಕ್ಕೂ, ಬಿಸಿ ಬಿಸಿಲಿನಿಂದ ಕೂಡಿತ್ತು ಮತ್ತು ಸರಾಸರಿ ದಿನದ ತಾಪಮಾನವು 47 ° (117 °) ಕ್ಕೆ ಏರಿತು ತದನಂತರ ರಾತ್ರಿಯಲ್ಲಿ ತೀವ್ರ ಶುಷ್ಕ ಪರಿಸ್ಥಿತಿಗಳೊಂದಿಗೆ 20 ° (68 °) ಕ್ಕೆ ಇಳಿಯುತ್ತದೆ . ಇದರಿಂದ ೧೩ ಸದಸ್ಯರ ತಂಡದಲ್ಲಿ ಆರು ಮಂದಿ ಪಾದಯಾತ್ರೆ ಸ್ಥಗಿತಗೊಳಿಸಬೇಕಾದ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಕಡೆಠಂಕರ್ ಅವರು ಉಳಿದ ಏಳು ಸದಸ್ಯರಲ್ಲಿ ಒಬ್ಬರಾಗಿದ್ದರು. ಆಸ್ಟ್ರೇಲಿಯಾ ಮತ್ತು ಸಿಂಗಾಪುರದ ಇಬ್ಬರು ಮಹಿಳೆಯರನ್ನು ಹೊರತುಪಡಿಸಿ ಭಾರತದ ಏಕೈಕ ಮಹಿಳೆಯಾಗಿದ್ದ ಅವರು ೬೦ ದಿನಗಳ ನಿಗದಿತ ಅವಧಿಗಿಂತ ಒಂಬತ್ತು ದಿನಗಳ ಮುಂಚಿತವಾಗಿ ಚಾರಣವನ್ನು ಪೂರ್ಣಗೊಳಿಸಿದರು. == ಪ್ರಶಸ್ತಿಗಳು ಮತ್ತು ಪದಕಗಳು == ಇಂಡಿಯಾ ಟುಡೇ ಇವರನ್ನು ೩೫ ಯುವ ಸಾಧಕರಲ್ಲಿ ಒಬ್ಬರೆಂದು ಗೌರವಿಸಿದೆ. ಇವರು ಹಿರಾಕನಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವರ ಹೆಸರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದೆ. ಅವರಿಗೆ ಬಜಾಜ್ ಅಲಿಯಾನ್ಜೆ ಅತ್ಯಂತ ಸ್ಪೂರ್ತಿದಾಯಕ ಕೆಲಸ ಮಾಡುವ ಮಹಿಳೆ ಪ್ರಶಸ್ತಿಯನ್ನು ನೀಡಲಾಯಿತು. ಮಹಿಳೆಯಾಗಿ ಅವರ ಸ್ಪೂರ್ತಿದಾಯಕ ಕೆಲಸಕ್ಕಾಗಿ ಅವರು ಹಿರಾಕಾನಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಮತ್ತು "ದಿ ಟೈ ಆಸ್ಪೈರ್ ಇಂಡಿಯಾ ಯಂಗ್ ಅಚೀವರ್ ಅವಾರ್ಡ್ ೨೦೧೧" ಕೂಡಾ. ಅವರು ಪುಣೆಯ ಜಿಲ್ಲೆ ೩೧೩೧ ಗಾಗಿ ರೋಟರಿ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಗೆದ್ದಿದ್ದಾರೆ. == ಸಹ ನೋಡಿ == ಪರಿಶೋಧನೆ == ಉಲ್ಲೇಖಗಳು ==